• Slide
    Slide
    Slide
    previous arrow
    next arrow
  • ಪದ್ಮಶ್ರೀ ತುಳಸಿ ಗೌಡರಿಗೆ ಸಹೃದಯಿ ಬಳಗದಿಂದ ಸನ್ಮಾನ

    300x250 AD

    ಅಂಕೋಲಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡರಿಗೆ ಗದಗದ ಸಹೃದಯಿ ಬಳಗದವರು ಸನ್ಮಾನಿಸಿ ಗೌರವಿಸಿದರು.

    ಫಕೀರಪ್ಪ ಯಲ್ಲಪ್ಪ ಮಜ್ಜಿಗುಡ್ಡ ಮಾತನಾಡಿ, ತುಳಸಿಯವರು ನಮ್ಮ ದೇಶದ ಆಸ್ತಿ. ತೆರೆಮರೆಯಲ್ಲೇ ಅವರು ಕೆಲಸ-ಕಾರ್ಯ ಮಾಡುತ್ತ ಬಂದಿದ್ದಾರೆ. ಅವರನ್ನು ಗೌರವಿಸಿದ್ದು ಹೆಮ್ಮೆಯ ವಿಷಯ. ಆದ್ದರಿಂದ ಗದಗದಿಂದ ಆಗಮಿಸಿ ಗೌರವಿಸಲಾಗಿದೆ. ಅವರ ಆಶೀರ್ವಾದ ಪಡೆದದ್ದು ಸಂತಸ ತಂದಿದೆ ಎಂದರು.

    300x250 AD

    ಈ ಸಂದರ್ಭದಲ್ಲಿ ಶಕುಂತಲಾ ಫ. ಮಜ್ಜಿಗುಡ್ಡ, ಅಂಕೋಲಾ ಕೆನರಾ (ಸಿಂಡಿಕೇಟ್ ಬ್ಯಾಂಕ್) ಹಿರಿಯ ಶಾಖಾ ವ್ಯವಸ್ಥಾಪಕ ವೆಂಕಟೇಶ ಮಜ್ಜಿಗುಡ್ಡ, ಸುಮಂಗಲಾ ವೆಂಕಟೇಶ, ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top