• Slide
    Slide
    Slide
    previous arrow
    next arrow
  • ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿ; ಮೊಳಕೆಯೊಡೆದ ಕಟ್ಟಿದ ಭತ್ತ, ರೈತನ ಕಣ್ಣೀರು

    300x250 AD

    ಶಿರಸಿ: ಮೊಳಕೆ ಒಡೆದ ಕಟ್ಟಿದ ಭತ್ತ, ಮೆಕ್ಕೆಜೋಳದ ತೆನೆಗಳು, ನೀರಿನಲ್ಲಿ ಕೊಳೆಯುತ್ತಿರುವ ಅಡಿಕೆ ಇವುಗಳ ರಕ್ಷಣೆಗೆ ಪರಿಪರಿಯಾಗಿ ಪ್ರಯತ್ನಿಸುತ್ತಿರುವ ರೈತರು. ಇದು ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಕಂಡುಬರುತ್ತಿರುವ ದೃಶ್ಯ.

    ಹೌದು ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಸಾಕಷ್ಟು ಹಾನಿಯಾಗಿದ್ದು, ಮನೆಗಳು, ರಸ್ತೆಗಳು ಸಹಾ ಕುಸಿದು ಬಿದ್ದಿವೆ. ಈ ನಡುವೆ ಬೆಳೆದ ಭತ್ತ ಕೈಗೆ ಬಂದಿಲ್ಲ ಎಂದು ನೊಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೂ ನಡೆದು ಹೋಗಿದೆ.

    ಶಿರಸಿ ತಾಲೂಕಿನ ಉಸರಿ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು ಕೊಯ್ಲು ಮಾಡಿದ ಭತ್ತ ಮೊಳೊಕೆ ಒಡೆದಿದೆ. ಭತ್ತದ ಹುಲ್ಲು ಸಹಾ ಕಪ್ಪಾಗಿದ್ದು, ಬಳಕೆಗೆ ಬಾರದಾಗಿದೆ.
    ಕೆಲವರು ಮಳೆ ನಡುವೆಯೇ ಭತ್ತವನ್ನು ತರಾತುರಿಯಲ್ಲಿ ಬಣವೆ ಹಾಕಿದ್ದಾರೆ. ಕೆಲವರು ಭತ್ತದಿಂದ ಕಾಳು ಬೇರ್ಪಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಮೋಡಕವಿದ ವಾತಾವರಣ ಮುಂದುವರಿದಿದ್ದು, ಈಗಾಗಲೇ ತೇವಗೊಂಡ ಭತ್ತ ಮೊಳಕೆ ಒಡೆವ ಆತಂಕ ಹಾಗೇ ಇದೆ. ಎಕರೆಗೆ ಕನಿಷ್ಠ 50000 ರೂ. ವೆಚ್ಚಮಾಡಿ ಬೆಳೆದ ಭತ್ತ ಕೈಗೆ ಬಾರದೇ ಇದ್ದುದಕ್ಕೆ ರೈತ ಹತಾಷನಾಗಿದ್ದಾನೆ.

    ಜಿಲ್ಲೆಯಲ್ಲಿ 48,538 ಹೆಕ್ಟೇರ್ ಕೃಷಿ ಭೂಮಿ ಇದ್ದು 1,832 ಹೆಕ್ಟೇರ್ ಕೃಷಿ ಪ್ರದೇಶದ ಭತ್ತ ಹಾನಿಗೀಡಾಗಿದೆ. ಶಿರಸಿ ತಾಲೂಕಿನಲ್ಲಿ 6500 ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶದಲ್ಲಿ 320 ಹೆಕ್ಟೇರ್ ಪ್ರದೇಶದ ಭತ್ತ ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದ್ದು, ಶೇ 25 ರಷ್ಟು ರೈತರು ಬೆಳೆ ಹಾನಿ ಅನುಭವಿಸಿದ್ದಾರೆ.
    ನವೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಶೇ 80 ರಷ್ಟು ಮಳೆಯಾಗಿದ್ದು, ನ. 20 ರಂದು ಒಂದೇ ದಿನ 122 ಮಿ.ಮೀ ಮಳೆಯಾಗಿದೆ. ಪರಿಣಾಮ ಅಪಾರ ಹಾನಿ ಸಂಭವಿಸಿದೆ.

    300x250 AD

    ಮುಂಡಗೋಡು ಭಾಗದಲ್ಲಿ ಭತ್ತ ಸೇರಿದಂತೆ ಮೆಕ್ಕೆಜೋಳ, ಶುಂಠಿ ಬೆಳೆಗಳು ಹಾಳಾಗಿವೆ. ಅಲ್ಲದೇ ನಿರಂತರ ಸುರಿದ ಮಳೆಗೆ ಯಲ್ಲಾಪುರ ತಾಲೂಕಿನ ತುಡಗುಣಿ-ಸೂರಿಮನೆ
    ರಸ್ತೆ ಸೇತುವೆ ಬಳಿ ಕುಸಿತ ಉಂಟಾಗಿ ರಸ್ತೆ ಸಂಚಾರ ಕಡಿತವಾಗಿದೆ. ಅಲ್ಲದೇ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಮನೆಯೊಂದು ಕುಸಿದು ಇಬ್ಬರಿಗೆ ಗಾಯವಾಗಿದೆ.

    ಒಟ್ಟಿನಲ್ಲಿ ಅಕಾಲಿಕ ಮಳೆ ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿ ಸಾಕಷ್ಟು ಹಾನಿಯುಂಟು ಮಾಡಿದ್ದು, ಜನಜೀವನ ಹೈರಾಣಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top