Slide
Slide
Slide
previous arrow
next arrow

ಬುಡಕಟ್ಟು ಸ್ವಾತಂತ್ರ್ಯ ವೀರರ ವಸ್ತು ಸಂಗ್ರಹಾಲಯಕ್ಕೆ ಸಚಿವ ಅಮಿತ್ ಶಾ ಶಂಕುಸ್ಥಾಪನೆ

300x250 AD

ನವದೆಹಲಿ: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಅಸಂಖ್ಯಾತ ಬುಡಕಟ್ಟು ವೀರರಿಗೆ ಇಂದು ಗೃಹ ಸಚಿವ ಅಮಿತ್ ಶಾ ಗೌರವಾರ್ಪಣೆ ಮಾಡಿದರು.

ಪೂರ್ವ ಇಂಫಾಲದ ತಮೆಂಗ್‍ಲಾಂಗ್ ಜಿಲ್ಲೆಯ ಲುವಾಂಗ್‍ಕಾವೊ ಗ್ರಾಮದಲ್ಲಿ ರಾಣಿ ಗೈಡಿನ್ಲಿಯು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಶಾ, ಸ್ವಾತಂತ್ರ್ಯ ಚಳವಳಿಗೆ ರಾಣಿ ಗೈಡಿನ್ಲಿಯು ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

300x250 AD

ಈ ಯೋಜನೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯವು 15 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಿದೆ.

ಅಂಚೆ ಇಲಾಖೆಯು 1996 ರಲ್ಲಿ ರಾಣಿ ಗೈಡಿನ್ಲಿಯು ಅವರ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಕೋಸ್ಟ್ ಗಾರ್ಡ್ 2016 ರಲ್ಲಿ ವೇಗದ ಗಸ್ತು ನೌಕೆ ICGS ರಾಣಿ ಗೈಡಿನ್ಲಿಯು ಅನ್ನು ನಿಯೋಜಿಸಿತು.
ನ್ಯೂಸ್ 13

Share This
300x250 AD
300x250 AD
300x250 AD
Back to top