• Slide
    Slide
    Slide
    previous arrow
    next arrow
  • ವಿಶ್ವದರ್ಶನ ಶಾಲೆಯಲ್ಲಿ ಗಮನ ಸೆಳೆದ ಭಕ್ತ ಕನಕದಾಸ ಕಥಾ ಕಾಲಕ್ಷೇಪ ಹರಿಕಥೆ

    300x250 AD


    ಯಲ್ಲಾಪುರ: ಕನಕ ಜಯಂತಿ ಅಂಗವಾಗಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೋಮವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಹರಿಕಥೆ ಗಮನ ಸೆಳೆಯಿತು.


    ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಯಲ್ಲಾಪುರ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಥಾಕೀರ್ತನ ಕೋವಿದ ಸಿರಿವಿಠ್ಠಲ ಅಂಕಿತ ಈಶ್ವರದಾಸ ಕೊಪ್ಪೇಸರ ಅವರು `ಭಕ್ತ ಕನಕದಾಸ’ ಕಥಾ ಕಾಲಕ್ಷೇಪ ಎಂಬ ಹರಿಕಥೆಯನ್ನು ನಡೆಸಿಕೊಟ್ಟರು. ರಾಮಚಂದ್ರ ಹೆಗಡೆ ಕೋಣೆಸರ ಅವರು ಹಾರ್ಮೋನಿಯಂ ಹಾಗೂ ಪ್ರದೀಪ ಕೋಟೆಮನೆ ಅವರು ತಬಲಾ ಸಾತ್ ನೀಡಿದರು.

    300x250 AD


    ಸಭಾ ಕಾರ್ಯಕ್ರಮವನ್ನು ಶ್ರೀಶಾರದಾಂಬಾ ದೇವಸ್ಥಾನದ ವ್ಯವಸ್ಥಾಪಕರಾದ ಅಶೋಕ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಪ್ರಮುಖರಾದ ಗಂಗಾ ಭಟ್ಟ ಹಿತ್ಲಕಾರಗದ್ದೆ ಮೊದಲಾದವರು ಇದ್ದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಹಾಗೂ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಸ್ವಾಗತಿಸಿ, ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top