ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಮುಂಬೈನ ನೇವಲ್ ಡಾಕ್ಯಾರ್ಡ್ನಲ್ಲಿ ಭಾರತೀಯ ನೌಕಾಪಡೆಗೆ ಪ್ರಾಜೆಕ್ಟ್ 15ಬಿಯ ಐಎನ್ಎಸ್ ವಿಶಾಖಪಟ್ಟಣಂನ ಮೊದಲ ಸ್ಟೆಲ್ತ್-ಗೈಡೆಡ್ ಕ್ಷಿಪಣಿ ವಿಧ್ವಂಸಕ ಹಡಗನ್ನು ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು.
ಸ್ವದೇಶಿ ಉಕ್ಕು ಆಒಖ 249ಂ ಬಳಸಿ ನಿರ್ಮಿಸಲಾದ ಈ ದೈತ್ಯ ಹಡಗು ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಕ್ಷಿಪಣಿ ವಿಧ್ವಂಸಕ ನೌಕೆಯಾಗಿದ್ದು, ಒಟ್ಟಾರೆ ಉದ್ದ 163 ಮೀ ಮತ್ತು 7400 ಟನ್ಗಳಷ್ಟು ಡಿಸ್ಪ್ಲೇಸ್ಮೆಂಟ್ ಹೊಂದಿದೆ. ಹಡಗು ಸುಮಾರು 75 ಪ್ರತಿಶತದಷ್ಟು ಸ್ಥಳೀಯ ಅಂಶಗಳನ್ನು ಹೊಂದಿದೆ, ಇದು ಆತ್ಮನಿರ್ಭರ ಭಾರತಕ್ಕೆ ಮಹತ್ವದ ಕೊಡುಗೆ ನೀಡುತ್ತದೆ.
ಸೂಪರ್ಸಾನಿಕ್ ಮೇಲ್ಮೈಯಿಂದ ಮೇಲ್ಮೈ ಮತ್ತು ಮೇಲ್ಮೈಯಿಂದ ಗಾಳಿ ಕ್ಷಿಪಣಿಗಳು, ಮಧ್ಯಮ ಮತ್ತು ಅಲ್ಪ-ಶ್ರೇಣಿಯ ಬಂದೂಕುಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್ಗಳು ಮತ್ತು ಸುಧಾರಿತ ಎಲೆಕ್ಟ್ರಾನಿಕ್ ಯುದ್ಧ ಮತ್ತು ಸಂವಹನ ಸೂಟ್ಗಳು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಐಎನ್ಎಸ್ ವಿಶಾಖಪಟ್ಟಣಂ ಹೊಂದಿದ್ದು, ಇದರಿಂದಾಗಿ ಅದು ಭಾರತದ ಅತಿದೊಡ್ಡ ವಿಧ್ವಂಸಕಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ನ್ಯೂಸ್ 13