ಭಟ್ಕಳ: ರಾಷ್ಟ್ರೀಯ ಮಟ್ಟದ ಸಿ.ಎ, ಸಿ.ಎಸ್, ಇ.ಇ.ಟಿ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಸಿಎಸ್ ತರಬೇತಿ ಪಡೆದು ರಜನೀ ಶೇಟ್ ಬಿ.ಕಾಂ-ದ್ವಿತೀಯ, ಮನಿಶಾ ಮೇಸ್ತ, ಐಶ್ವರ್ಯ ನಾಯ್ಕ, ಫ್ಲೋರಿನಾ ಡಿಸೋಜಾ ಬಿ.ಕಾಂ-ತೃತೀಯ, ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಿಎ-ಸಿಎಸ್ ಆಕಾಂಕ್ಷಿಗಳಿಗೆ ಭವಿಷತ್ತಿನಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜು ಹೊಸ ಆಶಾಕಿರಣವನ್ನು ಮೂಡಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ವಿ ರೀಚ್ ಅಕಾಡೆಮಿಯೊಂದಿಗೆ ತರಬೇತಿ ಘಟಕವನ್ನು ಆರಂಭಿಸಿದ್ದು, ಮೊದಲ ಯತ್ನದಲ್ಲೇ ಯಶಸ್ಸನ್ನು ಸಾಧಿಸಿರುವ ಈ ವಿದ್ಯಾರ್ಥಿಗಳನ್ನು ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಇತರ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಸಿಎ-ಸಿಎಸ್ ತರಬೇತಿಯ ಸಂಯೋಜಕ ಫಣಿಯಪ್ಪ ಹೆಬ್ಬಾರ ಅಭಿನಂದಿಸಿದ್ದಾರೆ.