ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾ.ಪಂಚಾಯತ ವ್ಯಾಪ್ತಿಯ ಬಿಸಗೋಡ, ಕೊಲ್ಯಾಳ ಭಾಗದಲ್ಲಿ ಹುಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚಿಸಿದೆ.
ಸದಾಶಿವ ಭಟ್ಟ, ರಾಮನಾಥ ಭಟ್ಟ ಇತರರ ತೋಟದ ಬಳಿ ಮೇಯುತ್ತಿದ್ದ 3 ಆಕಳುಗಳನ್ನು ಹುಲಿ ಕೊಂದಿದೆ ಎನ್ನಲಾಗುತ್ತಿದೆ. ಎರಡು ತಿಂಗಳಿಂದ ಆನಗೋಡ ,ಗೇರಾಳ ಸಾವಗದ್ದೆ- ಬರಗದ್ದೆ, ಬಿಸಗೋಡ ಭಾಗದಲ್ಲಿ ನಾಯಿ, ದನಗಳನ್ನು ಹಿಡಿಯುತ್ತಿದೆ. ಹಗಲಿನಲ್ಲೂ ಸ್ಥಳೀಯರಿಗೆ, ಶಾಲಾ ಮಕ್ಕಳಿಗೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.