ಅಂಕೋಲಾ: ಪಟ್ಟಣದ ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನ.22ಕ್ಕೆ ನೇತ್ರದಾನ ಪ್ರತಿಜ್ಞಾ ಅಭಿಯಾನವನ್ನು ಆಯೋಜಿಸಿದೆ.
ಆಸಕ್ತರು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪಸ್ಥಿತರಿದ್ದು, ನೇತ್ರದಾನಕ್ಕೆ ಸಹಿ ಮಾಡಬಹುದು ಎಂದು ಡಾ. ಅರ್ಚನಾ ನಾಯ್ಕ ಹಾಗೂ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ತಿಳಿಸಿದ್ದಾರೆ.