• Slide
    Slide
    Slide
    previous arrow
    next arrow
  • ಜಾನುವಾರು ತಪ್ಪಿಸಲು ಹೋಗಿ ರಿಕ್ಷಾಕ್ಕೆ ಗುದ್ದಿದ ಕಾರು; ಮೂವರಿಗೆ ಗಾಯ

    300x250 AD

    ಭಟ್ಕಳ: ದಾರಿಯಲ್ಲಿದ್ದ ದನ ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಕಾರು, ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಬೆಳಕೆಯಲ್ಲಿಂದು ನಡೆದಿದೆ.

    300x250 AD


    ಕುಂದಾಪುರದ ಪ್ರಾತೇಶ ಮೊಗವೀರ, ರಾಮಚಂದ್ರ ಶೇಟ್, ಭರತ್ ಜೋಗಿ ಹಾಗೂ ನೂತನ್ ಮಡಿವಾಳ ಗಾಯಗೊಂಡವರು. ಕಾರ್’ನ ಪ್ರಯಾಣಿಕರು ಕುಂದಾಪುರದಿಂದ ಹೊನ್ನಾವರಕ್ಕೆ ಪ್ರಯಾಣ ಬೆಳೆಸಿದ್ದ ಸಮಯದಲ್ಲಿ ದಾರಿಯಲ್ಲಿದ್ದ ದನಗಳನ್ನು ರಕ್ಷಿಸಲು ಹೋದ ಕಾರು ಆಟೋ ರಿಕ್ಷಾಕ್ಕೆ ಗುದ್ದಿದೆ. ಪರಿಣಾಮ ರಿಕ್ಷಾ ಮಗುಚಿ ಬಿದ್ದು ಎಲ್ಲ ವಾಹನಗಳು ಜಖಂಗೊಂಡಿದೆ. ಗಾಯಾಳುಗಳನ್ನು ಕುಂದಾಪುರ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top