• Slide
    Slide
    Slide
    previous arrow
    next arrow
  • ಶಾಲಿನಿ ಭಟ್ ಕೇರಂನಲ್ಲಿ ‘ಫೆಡರೇಶನ್ ಕಪ್’ಗೆ ಆಯ್ಕೆ

    300x250 AD

    ಶಿರಸಿ: ಕರ್ನಾಟಕ ರಾಜ್ಯ ಕೇರಂ ಅಸೋಸಿಯೇಷನ್ ಹಾಗೂ  ಸ್ಟ್ರೈಕರ್ ಕೇರಂ ಅಸೋಸಿಯೇಷನ್ ನವರು ನಡೆಸಿದ ಕರ್ನಾಟಕ ರಾಜ್ಯ ಶ್ರೇಯಾಂಕ ಕೇರಂ ಪಂದ್ಯಾವಳಿಯಲ್ಲಿ ಶಿರಸಿಯ ಶ್ರೀಮತಿ ಶಾಲಿನಿ ಚಂದ್ರಶೇಖರ ಭಟ್ ತೃತೀಯ ಸ್ಥಾನ ಗಳಿಸಿದ್ದಾರೆ.

    ಆ ಮೂಲಕ ಅವರು ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯಲಿರುವ ಫೆಡರೇಶನ್ ಕಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
    ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಸರಕಾರಿ ನೌಕರರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದನ್ನು ಈ ವೇಳೆ ಸ್ಮರಿಸಬಹುದು.

    300x250 AD

    ಇವರ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ಕೇರಂ ಅಸೋಸಿಯೇಷನ್ ಅಧ್ಯಕ್ಷರಾದ ರವಿ ಹೆಗಡೆ ಗಡಿಹಳ್ಳಿ ಅದೇ ರೀತಿ ಸ್ಫೂರ್ತಿ ಕೇರಂ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top