ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯ ಹತ್ತಿರ ಇರುವ ದುರ್ಗಾದೇವಿ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವು ಅದ್ದೂರಿಯಿಂದ ಜರಗಿತು.ನಸುಕಿನ ವೇಳೆಯಿಂದ ದೇವಿಗೆ ಅಭಿಷೇಕ್, ಹೋಮ ಹವನ ನಡೆಯಿತು. ಬೆಳಿಗ್ಗೆ ಮುತ್ತೈದೆಯರು ಕುಂಭ ಹೊತ್ತು ಭಕ್ತಯಿಂದ ಸನವಳ್ಳಿ ಗ್ರಾಮದಲ್ಲಿ ಸಾಗಿ ನಂತರ ದುರ್ಗಾದೇವಿ ದೇವಸ್ಥಾನ ಹತ್ತಿರ ಜೋಗಮ್ಮರು ಪಡಲಿಗೆ ತುಂಬಿಸಿ ಜೋಗಿಪದ ಹಾಡಿದರು. ಸುತ್ತಮತ್ತಲಿನ ಗ್ರಾಮದವರು ಸಂಖ್ಯೆಯಲ್ಲಿ ಬಂದು ದೇವಿಯ ದರ್ಶನ ಪಡೆದು ದುರ್ಗಾದೇವಿ ಕೃಪೆಗೆ ಪಾತ್ರರಾದರು. ಮಧ್ಯಾಹ್ನ ವಿಶೇಷ ಪೂಜೆ ನಡೆಸಿ ಭಕ್ತಾಂದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಸಿದ್ದಪ್ಪ ಕಳಸಗೇರಿ, ಕಲ್ಮೇಶ ಕೆರೆಹೊಲದವರ, ಗುಡ್ಡಪ್ಪ ಯಲ್ಲಾಪುರ, ಚಂದ್ರಶೇಖರ ಗೋಕಿವರ, ಪ್ರವೀಣ ಕಳದಗೇರಿ, ಫಕ್ಕಿರಾ ಪೂಜಾರ, ಗಣಪತಿ ಕೆರೆಹೊಲದವರ, ಗುಡ್ಡಪ್ಪ ಸುಣಗಾರ, ರಾಜು ಗುಬ್ಬಕ್ಕನವರ, ಮಂಜು ಕೊಣನಕೇರಿ, ಗೌರೀಶ ಹರಿಜನ, ಗುಡದಯ್ಯಾ ಕಳಸಾಪುರ, ಸಂಪತ್ತ ಕ್ಯಾಮಣಕೆರಿ, ಸುರೇಶ ಕೆರೆಹೊಲದವರು ಮತ್ತು ಇತರರು ಜಾತ್ರಾ ನೇತೃತ್ವ ವಹಿಸಿದ್ದರು