• Slide
    Slide
    Slide
    previous arrow
    next arrow
  • ನಿಂತ ಬಸ್ಸಿಗೆ ಹಿಂಬದಿಯಿಂದ ಗುದ್ದಿದ ಲಾರಿ; ಮೂವರಿಗೆ ಗಾಯ

    300x250 AD

    ಯಲ್ಲಾಪುರ: ಪ್ರಯಾಣಿಕರನ್ನು ಇಳಿಸುತಿದ್ದ ವಾಕರಾಸಂಸ್ಥೆ ಬಸ್ಸಿನ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದಲ್ಲಿ ನಡೆದಿದೆ.


    ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ನಿಂತ ಬಸ್ಸಿಗೆ ಹೊಡೆದಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತಿದ್ದ ಬಸ್ ಗೆ ಲಾರಿ ಗುದ್ದಿದೆ. ಪರಿಣಾಮ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ. ಮಹಿಳೆಯೊಬ್ಬಳಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    300x250 AD


    ಲಾರಿ ಚಾಲಕ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಯೋಗೇಶ ಬಬಣ ಸಿಂಧೆ ವಿರುದ್ಧ ಪ್ರಕರಣ ದಾಖಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top