ಶಿರಸಿ: ತಾಲೂಕಿನ ಬನವಾಸಿಯ ಎಡಯೂರ ಅಂಬಾ ಭವಾನಿ ದೇವಾಲಯದ ವರ್ಧಂತಿ ಉತ್ಸವ ಸಮಾರಂಭದಲ್ಲಿ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಭಾಗಿಯಾಗಿ ಶ್ರೀ ದೇವಿಯ ಆಶಿರ್ವಾದ ಪಡೆದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯವರು ಹಮ್ಮಿಕೊಂಡಿದ ‘ಅನ್ನಸಂತರ್ಪಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾಧಿಗಳಿಗೆ ಅನ್ನಪ್ರಸಾದವನ್ನು ಬಡಿಸುವ ಕಾರ್ಯದಲ್ಲಿ ಪಾಲ್ಗೊಂಡರು.