• Slide
    Slide
    Slide
    previous arrow
    next arrow
  • ಆಯುರ್ವೇದ ಆಸ್ಪತ್ರೆಯಲ್ಲಿ ಆಲೋಪತಿ ಚಿಕಿತ್ಸೆ; ಆರೋಗ್ಯಾಧಿಕಾರಿ ದಾಳಿ

    300x250 AD

    ಅಂಕೋಲಾ: ನಗರದ ‘ಗಂಗಾ ಕ್ಲಿನಿಕ್’ ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ ಮತ್ತು ರೋಗಿಗಳಿಗೆ ಸಲೈನ್ ನೀಡುತ್ತಿರುವ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ದಾಳಿ ನಡೆಸಿ ಕ್ರಮ ಕೈಗೊಂಡ ಘಟನೆ ನಡೆದಿದೆ.

    300x250 AD


    ಪಟ್ಟಣದ ಖಾಸಗಿ ಆಸ್ಪತ್ರೆ ಗಂಗಾ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿ ಡಾ.ನಿತಿನ್ ಹೊಸ್ಮಿಲಕರ ಅವರು ಶುಕ್ರವಾರ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕ್ಲಿನಿಕ್‍ನಲ್ಲಿ ಆಯುರ್ವೇದಿಕ್ ವೈದ್ಯ ದುಗ್ಗಾಣಿಯವರು 6 ರೋಗಿಗಳಿಗೆ ಅಲೋಪತಿ ಸಲೈನ್ ಹಚ್ಚಿ ಚಿಕಿತ್ಸೆಯನ್ನು ನೀಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವರ ಆಸ್ಪತ್ರೆಯಲ್ಲಿನ ಎಲ್ಲಾ ಅಲೋಪತಿ ಔಷಧಗಳನ್ನು ವಶಪಡಿಸಿಕೊಂಡರು. ಬಳಿಕ ವೈದ್ಯ ದುಗ್ಗಾಣಿಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಡಿಎಚ್‍ಓ ಮತ್ತು ಜಿಲ್ಲಾಧಿಕಾರಿಯವರಿಗೆ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಮಾಹಿತಿಯನ್ನು ಕಳುಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top