• Slide
    Slide
    Slide
    previous arrow
    next arrow
  • ಕಸಾಪ ಚುನಾವಣೆ; ಮತ ಯಾಚನೆ ಮಾಡಿದ ವೇಣುಗೋಪಾಲ ಮದ್ಗುಣಿ

    300x250 AD

    ಯಲ್ಲಾಪುರ: ಸಾಹಿತ್ಯ ಪರಿಚಾರಕನಾಗಿ, ಸಂಘಟಕನಾಗಿ ಇಡೀ ಜಿಲ್ಲೆಯಲ್ಲಿ ಓಡಾಡಿದ್ದು, ಎಲ್ಲೆಡೆ ಸಾಹಿತ್ಯಾಭಿಮಾನಿಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು, ಈ ಬಾರಿ ಗೆಲುವು ತಮ್ಮದೇ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೇಣುಗೋಪಾಲ ಮದ್ಗುಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


    ಅವರು ಗುರುವಾರ ಪತ್ರಕರ್ತ ರೊಂದಿಗೆ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದ ಒಡನಾಟದ ನಂಟು ಹೊಂದಿದ್ದೇನೆ. ಐದು ವರ್ಷಗಳಿಂದ ಕಸಾಪ ತಾಲೂಕಾ ಅಧ್ಯಕ್ಷನಾಗಿ ನೂರಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದೇನೆ. ತಾಲೂಕಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ. 40 ವರ್ಷಗಳ ನಂತರ ಜಿಲ್ಲಾ ಸಮ್ಮೇಳನ ಯಲ್ಲಾಪುರದಲ್ಲಿ ಅದ್ದೂರಿಯಾಗಿ ಮಾಡಲಾಗಿದೆ. ಸ್ಥಳೀಯವಾಗಿ ಅರ್ಥ ಪೂರ್ಣ ಸಾಹಿತ್ಯಿಕ ಕಾರ್ಯಕ್ರಮಗಳಿಂದ ಸಾಹಿತ್ಯ ಭವನವನ್ನು ನವೀಕರಿಸಿದ್ದೇನೆ ಎಂದರು.

    300x250 AD


    ನಾನು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದಲ್ಲಿ ರಾಜ್ಯ ಸಮ್ಮೇಳನ ಜಿಲ್ಲೆಯಲ್ಲಿ ಮಾಡುತ್ತೇನೆ. ಅಲ್ಲದೇ ಮಹಿಳೆ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳ ಮಾಡುತ್ತೇನೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 60 ಸಾಹಿತ್ಯ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು. ಹೊಸ ಲೇಖಕಕರಿಗೆ ಪೆÇ್ರೀತ್ಸಾಹ, ಹಿರಿಯ ಸಾಹಿತಿಗಳೊಂದಿಗೆ ಸಮಾಲೋಚನೆ, ಕನ್ನಡ ಮನಸುಗಳನ್ನು ಒಗ್ಗೂಡಿಸಿ ಪ್ರಾಮಾಣಿಕವಾಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ. ಸಾಹಿತ್ಯದ ಅಭಿಮಾನಿಗಳು, ಮತದಾರರು ತಮ್ಮನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top