Slide
Slide
Slide
previous arrow
next arrow

ನ.10ಕ್ಕೆ ಇ-ಖಾತಾ ಸಮಸ್ಯೆ ಕುರಿತು ನಗರಸಭಾಧ್ಯಕ್ಷರಿಗೆ ಮನವಿ; ಸಾಂಕೇತಿಕ ಧರಣಿ

300x250 AD


ಶಿರಸಿ: ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿ ಸಭೆ ಮಂಗಳವಾರ ಕೈಗೊಂಡ ನಿರ್ಣಯದಂತೆ ನ.10ರ ಬೆಳಿಗ್ಗೆ 11 ಘಂಟೆಗೆ ಶಿರಸಿ ನಗರಸಭಾಧ್ಯಕ್ಷರಿಗೆ ಇ-ಖಾತಾ ಸಮಸ್ಯೆ ಕುರಿತು ಮನವಿ ನೀಡಿ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಲಾಗಿದೆ.

ಕಾರವಾರ ನಗರ ಸಭೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಡಿ.ಎಂ.ಎ. 29ಪಿ ಟಿ.ಐ.ಎಸ್/2015-16ರ 20-4-2016 ರ ಮೂಲ ಆದೇಶ ಅನುಸರಿಸಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಪಾರಂ -3 ಕೊಡಲಾಗುತ್ತಿದೆ. ಅದೇ ರೀತಿ ಇಲ್ಲಿ ಸಹ ಕೊಡುವಂತಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.

300x250 AD


ಸಾರ್ವಜನಿಕರ ಸಮಸ್ಯೆಯ ಕುರಿತು ಈ ಹೋರಾಟದ ಸುಪರ್ದಿಯನ್ನು ತಾವುಗಳು ಆಗಮಿಸಿ ತಮ್ಮ ಮಾದ್ಯಮದಲ್ಲಿ ಪ್ರಕಟಿಸಿ ಹೋರಾಟಕ್ಕೆ ಬೆಂಬಲ ನೀಡಬೇಕಾಗಿ ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಅನವಟ್ಟಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top