ಶಿರಸಿ: ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿ ಸಭೆ ಮಂಗಳವಾರ ಕೈಗೊಂಡ ನಿರ್ಣಯದಂತೆ ನ.10ರ ಬೆಳಿಗ್ಗೆ 11 ಘಂಟೆಗೆ ಶಿರಸಿ ನಗರಸಭಾಧ್ಯಕ್ಷರಿಗೆ ಇ-ಖಾತಾ ಸಮಸ್ಯೆ ಕುರಿತು ಮನವಿ ನೀಡಿ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಲಾಗಿದೆ.
ಕಾರವಾರ ನಗರ ಸಭೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಡಿ.ಎಂ.ಎ. 29ಪಿ ಟಿ.ಐ.ಎಸ್/2015-16ರ 20-4-2016 ರ ಮೂಲ ಆದೇಶ ಅನುಸರಿಸಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಪಾರಂ -3 ಕೊಡಲಾಗುತ್ತಿದೆ. ಅದೇ ರೀತಿ ಇಲ್ಲಿ ಸಹ ಕೊಡುವಂತಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಸಾರ್ವಜನಿಕರ ಸಮಸ್ಯೆಯ ಕುರಿತು ಈ ಹೋರಾಟದ ಸುಪರ್ದಿಯನ್ನು ತಾವುಗಳು ಆಗಮಿಸಿ ತಮ್ಮ ಮಾದ್ಯಮದಲ್ಲಿ ಪ್ರಕಟಿಸಿ ಹೋರಾಟಕ್ಕೆ ಬೆಂಬಲ ನೀಡಬೇಕಾಗಿ ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಅನವಟ್ಟಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.