ದಾವಣಗೆರೆ ಯಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ದಲ್ಲಿ ಶಿರಸಿ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಣಜವಳ್ಳಿ ಯ ಸಹಶಿಕ್ಷಕಿ ಯಾದ ಶಾಲಿನಿ ಚಂದ್ರಶೇಖರ್ ಭಟ್, ಕೇರಂ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಸತತವಾಗಿ ಎರಡನೇ ಬಾರಿ ಪಡೆದಿದ್ದಾರೆ.
ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಶಿಕ್ಷಕರ ಸಾಧನೆಗೆ ಶಿರಸಿ ಯ ದೇವಿಕೆರೆಯ ಸ್ಫೂರ್ತಿ ಕೇರಂ ಅಸೋಸಿಯೇಷನ್ (ರಿ )ಇದರ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಶುಭ ಹಾರೈಸಿದ್ದಾರೆ.