• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ಸತ್ಯೇನ ಲೋಕಂ ಜಯತಿ ದಾನೈರ್ಜಯತಿ ದೀನತಾಮ್
    ಗುರೂನ್ ಶುಶ್ರೂಷಯಾ ಜೀಯಾದ್ಧನುಷಾ ಏವ ಶಾತ್ರವಾನ್ ||

    ಸತ್ಯದಿಂದ ಜನಗಳ ಮನವನ್ನೂ, ದಾನದಿಂದ ದೀನತೆಯನ್ನೂ, ಗುರುಗಳನ್ನು ಸೇವೆಯಿಂದಲೂ ಮತ್ತು ಶತ್ರುಗಳನ್ನು ಧನುಸ್ಸಿನಿಂದಲೂ (ಆಯುಧದಿಂದಲೂ) ಗೆಲ್ಲತಕ್ಕದ್ದು. ಬದುಕಿನಲ್ಲಿ ಪ್ರತಿಯೊಂದು ವ್ಯಕ್ತಿ ಮತ್ತು ವಿಷಯಕ್ಕೂ ಒಂದಿಲ್ಲೊಂದಕ್ಕೆ ವಶ್ಯವಾಗಿರುತ್ತವೆ. ಲೋಕದಲ್ಲಿ ಬದುಕುವಾಗ ಈ ಸಂಗತಿಗಳು ತಿಳಿದಿರಬೇಕಾಗುತ್ತದೆ. ಹಿಂಡಿ ಮತ್ತು ಹಸಿಹುಲ್ಲು ತೋರಿಸಿದರೆ ಎಂಥ ಹಸುವೂ ಅದಕ್ಕೆ ವಶವಾಗಿ ಬರುತ್ತದೆ ಅನ್ನುವ ಸಾಮಾನ್ಯ ಜ್ಞಾನದಂತೆಯೇ ಬೇರೆ ಬೇರೆ ಸ್ತರದ ವ್ಯಕ್ತಿಗಳನ್ನು ಮತ್ತು ಸಂಗತಿಗಳನ್ನು ವಶವಾಗಿಸಿಕೊಳ್ಳುವ ತಂತ್ರವೇನು ಅನ್ನುವುದಕ್ಕೆ ಈ ಸುಭಾಷಿತ ದಾರಿದೋರುತ್ತದೆ. ದೀನತೆಯೆಂಬ ಮನಸಿನ ಜಾಡ್ಯವನ್ನು ಕಳೆದುಕೊಳ್ಳಲಿಕ್ಕೆ ತಾನು ಸ್ವತಃ ದಾನ ಮಾಡುವುದೇ ಉಪಾಯ ಎಂಬುದನ್ನು ವಿಶೇಷವಾಗಿ ಗಮನಿಸಬಹುದು.
    ಶ್ರೀ ನವೀನ ಗಂಗೋತ್ರಿ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top