• Slide
    Slide
    Slide
    previous arrow
    next arrow
  • ಟೆಂಪೋ ಪಲ್ಟಿ; 8 ಕ್ಕೂ ಅಧಿಕ ಮಂದಿಗೆ ಗಾಯ

    300x250 AD

    ಭಟ್ಕಳ: ತಮಿಳುನಾಡಿನಿಂದ ಹೊರಟು ಕೊಲ್ಲೂರು ದರ್ಶನ ಮುಗಿಸಿ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಮಹೀಂದ್ರ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದವರ ಪೈಕಿ 8 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಇಲ್ಲಿನ ಸರ್ಪನಕಟ್ಟೆಯ ಹುಲಿದೇವರ ಮನೆ ಸಮೀಪ ರವಿವಾರ ರಾತ್ರಿ ನಡೆದಿದೆ.

    300x250 AD


    ಹೆದ್ದಾರಿ ಕಾಮಗಾರಿ ಅವಾಂತರವೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಆಪಾದಿಸಿದ ಸಾರ್ವಜನಿಕರು ದಿನಕ್ಕೊಂದು ಕಡೆಗೆ ಸೂಚನಾ ಫಲಕ ಬದಲಾಯಿಸುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಟೆಂಪೋ ಪಲ್ಟಿಯಾದ ತಕ್ಷಣ ಜಮಾಯಿಸಿದ ಹಲವಾರು ಮಂದಿ ಗಾಯಗೊಂಡವರನ್ನು ಹೊರಗೆ ತೆಗೆಯಲು ಹಾಗೂ ಆಸ್ಪತ್ರೆ ಸೇರಿಸಲು ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top