ನವದೆಹಲಿ: ಒಂದು ಕೋಟಿ ಲಸಿಕೆ ಡೋಸ್ ಹೆಗ್ಗುರುತನ್ನು ತಲುಪಿದರೂ ಕೋವಿಡ್ -19 ವಿರುದ್ಧದ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು, ಮುಖಗವಸುಗಳನ್ನು ಧರಿಸಬೇಕು, ಹಬ್ಬದ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಬೇಕು. ಮುಂಬರುವ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಬೇಕು ಎಂದು ವಿನಂತಿಸಿದರು. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ನಿರ್ಲಕ್ಷ್ಯ ಇರಬಾರದು ಎಂದು ಅವರು ಎಚ್ಚರಿಕೆ ನೀಡಿದರು. ಕವಚ ಎಷ್ಟು ಪ್ರಬಲವಾಗಿದ್ದರೂ, ಯುದ್ಧ ನಡೆಯುವವರೆಗೂ ಶಸ್ತ್ರಾಸ್ತ್ರಗಳನ್ನು ಬಿಸಾಕಲಾಗುವುದಿಲ್ಲ ಎಂದು ಹೇಳಿದರು.
ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳದ ಎಲ್ಲರಿಗೂ ಲಸಿಕೆ ಹಾಕುವಂತೆ ಪ್ರಧಾನಿ ಮನವಿ ಮಾಡಿದರು. ಲಸಿಕೆ ಹಾಕಿಸಿಕೊಂಡವರು ಇತರರನ್ನು ಪೆÇ್ರೀತ್ಸಾಹಿಸಬೇಕು. ಭಾರತದ ಲಸಿಕೆ ಅಭಿಯಾನವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಾಯಸ್ಗೆ ಒಂದು ಜೀವಂತ ಉದಾಹರಣೆಯಾಗಿದೆ. ನಿನ್ನೆ ನೂರು ಕೋಟಿ ಲಸಿಕೆ ಡೋಸ್ ಅನ್ನು ನೀಡುವ ಮೂಲಕ ಭಾರತವು ಆತಂಕದ ಸೇತುವೆಯನ್ನು ಯಶಸ್ವಿಯಾಗಿ ದಾಟಿದೆ ಎಂದು ಮೋದಿ ಹೇಳಿದರು.
ಭಾರತವು ಕಷ್ಟಕರವಾದ ಆದರೆ ಅಸಾಧಾರಣ ಗುರಿಯನ್ನು ಯಶಸ್ವಿಯಾಗಿ ದಾಟಿದೆ ಎಂದಿದ್ದಾರೆ.
ಈ ಸಾಧನೆಯ ಹಿಂದೆ 130 ಕೋಟಿ ದೇಶವಾಸಿಗಳ ಶ್ರಮವಿದೆ ಎಂದು ಪ್ರಧಾನಿ ಹೇಳಿದರು. 100 ಕೋಟಿ ಲಸಿಕೆ ಡೋಸ್ಗಳು ಕೇವಲ ಸಂಖ್ಯೆಯಲ್ಲ, ಆದರೆ ಇದು ಒಂದು ರಾಷ್ಟ್ರವಾಗಿ ನಮ್ಮ ಸಾಮಥ್ರ್ಯವನ್ನು ತೋರಿಸುತ್ತದೆ. ಇದು ಕೇವಲ ಅಂಕಿಅಂಶಗಳಲ್ಲ, ಇತಿಹಾಸದ ಹೊಸ ಅಧ್ಯಾಯ ಎಂದು ಅವರು ಹೇಳಿದರು. ಕಷ್ಟಕರವಾದ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಸಾಧಿಸುವುದು ಹೊಸ ಭಾರತಕ್ಕೆ ತಿಳಿದಿದೆ ಎಂದು ಮೋದಿ ಹೇಳಿದರು.
ಕಳೆದ 100 ವರ್ಷಗಳಲ್ಲಿ ಜಗತ್ತಿನಾದ್ಯಂತ ಗೋಚರಿಸಿದ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಭಾರತದ ಉತ್ಸಾಹವು ಶ್ಲಾಘನೀಯವಾಗಿದೆ ಮತ್ತು ದೃಢ ನಿಶ್ಚಯ ಬಲಿಷ್ಠವಾಗಿದೆ. ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಯಾವಾಗಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದ. ಆದರೆ ಜಾಗತಿಕ ಸಾಂಕ್ರಾಮಿಕ ರೋಗ ಬಂದಾಗ ಭಾರತವು ತಾನು ಯಾವುದೇ ರಾಷ್ಟ್ರಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿತು. ಸರ್ಕಾರವು ಜನರಿಗೆ ಗರಿಷ್ಠ ಲಸಿಕೆಯನ್ನು ಖಚಿತಪಡಿಸಿಕೊಳ್ಳಲು ಉಚಿತ ಲಸಿಕೆ ನೀಡಿ ನಾಗರಿಕರಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.
ವಿಐಪಿ ಸಂಸ್ಕೃತಿಯು ಲಸಿಕೆ ಕಾರ್ಯಕ್ರಮವನ್ನು ಮರೆಮಾಚದಂತೆ ಸರ್ಕಾರವು ಖಾತ್ರಿಪಡಿಸಿದೆ ಮತ್ತು ಪ್ರತಿಯೊಬ್ಬರನ್ನು ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂದು ಮೋದಿ ಹೇಳಿದರು.