• Slide
    Slide
    Slide
    previous arrow
    next arrow
  • ಎಂ.ಪಿ ಕರ್ಕಿ ನಿಧನಕ್ಕೆ ಸಂಸದ ಅನಂತಕುಮಾರ ಸಂತಾಪ

    300x250 AD

    ಶಿರಸಿ: ಜನಸಂಘದ ಕಾಲದಿಂದ ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿ ಸುಧೀರ್ಘ 18 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಎರಡು ಬಾರಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿ ಜನಸೇವೆ ಮಾಡಿದ ಹಿರಿಯ ರಾಜಕಾರಣಿ ಡಾ. ಎಂ.ಪಿ. ಕರ್ಕಿ ನಮ್ಮನ್ನಗಲಿದ್ದು, ಅವರ ನಿಧನಕ್ಕೆ ಸಂಸದ ಅನಂತಕುಮಾರ ಹೆಗಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    300x250 AD


    ಅತ್ಯಂತ ಸರಳ-ಸಜ್ಜನ ರಾಜಕಾರಣಿ, ರಾಜ್ಯದ ಅಭಿವೃದ್ಧಿ ಬಗ್ಗೆ ವಿಶೇಷ ಕಲ್ಪನೆ ಹೊಂದಿರುವ ಮುತ್ಸದ್ದಿ ಇಂದು ನಮ್ಮ ಮಧ್ಯದಲ್ಲಿ ಇಲ್ಲ ಎಂಬುದು ನೋವಿನ ಸಂಗತಿ. ಶ್ರೀಯುತರ ನಿಧನದಿಂದಾಗಿ ಜಿಲ್ಲೆಗೆ ಹಾಗೂ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಂಸದ ಹೆಗಡೆ ಪ್ರಾರ್ಥಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top