ಕಾರವಾರ: ಕೆ.ಎಲ್.ಇ ಎಂಡೋಮೆಂಟ್ ಸಭಾಭವನದಲ್ಲಿ ಅಕ್ಟೋಬರ್ 19ರವರೆಗೆ ತಾಲೂಕಿನ ವಿದ್ಯಾರ್ಥಿ ಯುವ ಜನರಿಗೆ ಉಚಿತ ಯಕ್ಷಗಾನ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಪ್ರತಿದಿನ ಮುಂಜಾನೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಈ ಶಿಬಿರ ನಡೆಯಲಿದೆ. ಶಿಬಿರವನ್ನು ಸಂಗಾತಿ ರಂಗಭೂಮಿ ಯಕ್ಷ ಸಮೂಹ ಕೇಂದ್ರ ಆಯೋಜಿಸಿದೆ. ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ಗೋವಿಂದ್ರಾಯ ಕೆ.ನಾಯ್ಕ ಕರಪತ್ರ ಬಿಡುಗಡೆ ಮಾಡಿ ಶಿಬಿರದ ಮಹತ್ವ ತಿಳಿಸಿದರು. ಸಂಘಟಕರಾದ ಸಂದೀಪ ಗಾಂವಕರ, ಮಾರುತಿ ನಾಯ್ಕ, ಲಕ್ಷ್ಮೀಶ್ವರ, ಮಾರುತಿ ನಾಯ್ಕ ಹನುಮಟ್ಟಾ, ಮಹಾನಂದ ಮಡಿವಾಳ,ಮಿಥುನ ನಾಯ್ಕ, ರಾಮ ಹಿಲ್ಲೂರು ಮುಂತಾದವರಿದ್ದರು. ತರಬೇತಿಯನ್ನು ಯಕ್ಷಗಾನ ಭಾಗವತರಾದ ವೆಂಕಟೇಶ ಗೌಡ ಬಿಟ್ಟೂರು ಅವರು ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಾರುತಿ ನಾಯ್ಕ ಹನುಮಟ್ಟಾ -7619271961,ಮಾರುತಿ ನಾಯ್ಕಲಕ್ಷೇಶ್ವರ-9482413948, ವಿನಾಯಕ ಶೆಟ್ಟಿ – 9611006994, ಮಹಾನಂದ ಮಡಿವಾಳ-9481372642, ಜಿ. ಆರ್. ತಾಂಡೇಲ-9481052402 ಇವರನ್ನು ಸಂಪರ್ಕಿಸಬಹುದಾಗಿದೆ.