Slide
Slide
Slide
previous arrow
next arrow

ಗುಡ್ಡಗಾಡು ಪ್ರದೇಶ ನಾಚಿಗದ್ದೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ‌

300x250 AD

ಅಂಕೋಲಾ: ತಾಲೂಕಿನ ಗಡಿ ಪ್ರದೇಶ ಡೋಂಗ್ರಿ ಪಂಚಾಯತದ ತುತ್ತ ತುದಿ ನಾಚಿಗದ್ದೆ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನ ಮಂಡಲದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ಗುಡ್ಡಗಾಡು ಪ್ರದೇಶವಾದ ನಾಚಿಗದ್ದೆಯಲ್ಲಿ ಅಲ್ಲಲ್ಲಿ ಎಂಬಂತೆ ಮೊಬೈಲ್ ನೆಟ್ವರ್ಕ ಬರುವುದರಿಂದ ಸದಸ್ಯತ್ವ ತುಂಬಾ ಕಠಿಣವಾದರೂ ಸಿಗ್ನಲ್ ಹುಡುಕಿಕೊಂಡು ಹೆಗ್ಗಾರಳ್ಳಿಯ ಜಲಪಾತದ ಹತ್ತಿರ ಜನರನ್ನು ಕರೆದುಕೊಂಡು ಹೋಗಿ ಮರ ಹತ್ತಿ ಸಿಗ್ನಲ್ ಹುಡುಕಿ ಸದಸ್ಯತ್ವ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಅಗಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಬೂತ್ ಅಧ್ಯಕ್ಷ ಶೇಖರ ಗಾಂವ್ಕರ್ ಹರಸಾಹಸಪಟ್ಟು ಗುಡ್ಡದ ತುತ್ತ ತುದಿಯ ಗ್ರಾಮಕ್ಕೆ ತೆರಳಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಿದ್ದಾರೆ.
ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ತಂಡದ ನಿಸ್ವಾರ್ಥ ಕಾರ್ಯಕ್ಕೆ ಮಾಜಿ ಶಾಸಕಿ‌ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top