Slide
Slide
Slide
previous arrow
next arrow

ದಸರಾ ಧರ್ಮ ಸಮ್ಮೇಳನ: ರವೀಂದ್ರ ನಾಯ್ಕ್‌ಗೆ ಅಭಿನಂದನೆ

300x250 AD

ಶಿರಸಿ: ಶ್ರೀ ರಂಬಾಪುರಿ ಜಗದ್ಗುರುಗಳು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ, ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ ಮೂರು ದಶಕಕ್ಕಿಂತ ಮಿಕ್ಕಿ ಸಂಘಟನೆ, ಹೋರಾಟ ಮಾಡುತ್ತಿರುವ ಶಿರಸಿಯ ಹಿರಿಯ ವಕೀಲ ರವೀಂದ್ರ ನಾಯ್ಕ ಅವರಿಗೆ ಶ್ರೀ ರಂಬಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸ್ವಾಮೀಜಿಯವರು ಅಂಬಿನಂಧಿಸಿ ಅರಣ್ಯ ಭೂಮಿ ಹಕ್ಕಿಗೆ ಶೀಘ್ರ ಯಶಸ್ಸು ಸಿಗಲಿ ಎಂದು ಆಶೀರ್ವದಿಸಿದರು.
   
ಗದಗ ಜಿಲ್ಲೆಯ ರೋಣಾ ತಾಲೂಕಿನ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣ, ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಪ್ರಮುಖ ವೇದಿಕೆಯಲ್ಲಿ ಅರಣ್ಯ ಭೂಮಿ ಹಕ್ಕು ಮತ್ತು ಅವೈಜ್ಞಾನಿಕ ಕರಡು ಕಸ್ತೂರಿ ರಂಗನ್ ವರದಿಯ ಕುರಿತು ಜಾಗೃತಿಗೊಳಿಸುತ್ತಿರುವ ಕಾರ್ಯಕ್ಕೆ ಶ್ರೀಗಳು ಹಿರಿಯರ ಉಪಸ್ಥಿತಿಯಲ್ಲಿ ಅಭಿನಂದಿಸಿದ್ದರು ಎಂದು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top