Slide
Slide
Slide
previous arrow
next arrow

ದೇವಳಮಕ್ಕಿಯ ನಿರ್ಮಿತ ಪಾರ್ಕ್‌ನಲ್ಲಿ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ಕಾರ್ಯಕ್ರಮ

300x250 AD

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ನಿರ್ಮಿತ ಪಾರ್ಕ್‌ನಲ್ಲಿ ಗುರುವಾರದಂದು ಪ್ರಧಾನಮಂತ್ರಿ ಹೇಳಿದಂತೆ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮ ನಡೆಯಿತು.

ನಿರ್ಮಿತ ಪಾರ್ಕ್‌ನ ಮಾಲೀಕ ಸೋಮನಾಥ ವೇಣೇಕರ ಹಾಗೂ ಅವರ 40 ವರ್ಷದ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜಿನ ಗೆಳೆಯ ಬಳಗದ ಗೆಟ್ ಟುಗೆದರ್ ಕಾರ್ಯಕ್ರಮದ ಸವಿ ನೆನಪಿಗಾಗಿ ಸುಮಾರು ನೂರಕ್ಕೂ ಹೆಚ್ಚು ಗಿಡಗಳನ್ನು ತಾಯಿ ಹೆಸರಿನಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಳಮಕ್ಕಿ ಉಪ ವಲಯ ಅರಣ್ಯಾಧಿಕಾರಿ ಸುಭಾಷ್ ರಾಥೋಡ್, ಮತ್ತೋರ್ವ ಉಪ ವಲಯ ಅರಣ್ಯಾಧಿಕಾರಿ ಪ್ರೇಮಾನಂದ ಪೇಡ್ನಕರ, ಅರಣ್ಯ ಗಸ್ತು ಪಾಲಕ ರಾಜಶೇಖರ ತಾರಣವರ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top