Slide
Slide
Slide
previous arrow
next arrow

ಪಿಸ್ತೂಲ್ ಹಿಡಿದು‌ ಓಡಾಡುತ್ತಿದ್ದವರ ಬಂಧನ

300x250 AD

ಜೊಯಿಡಾ: ಬಸ್ಸಿನಲ್ಲಿ ಪಿಸ್ತೂಲ್ ಹಿಡಿದು ಓಡಾಡುತ್ತಿದ್ದ ಐವರಲ್ಲಿ ಇಬ್ಬರನ್ನು ರಾಮನಗರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಆನಮೋಡು – ಗೋವಾ ಬಸ್ಸಿನಲ್ಲಿ ಈ ಡಕಾಯಿತರು ಸಂಚರಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರಿಗೆ ಈ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ ಮತ್ತು ರಾಮನಗರ ಪಿಎಸೈ ಬಸವರಾಜ ಮಬನೂರ ನಡೆಸಿದ ಕಾರ್ಯಾಚರಣೆಯಲ್ಲಿ ಈರ್ವರನ್ನು ಬಂಧಿಸಲಾಗಿದೆ.
ಉಳಿದ ಮೂವರು ತಪ್ಪಿಸಿಕೊಂಡಿದ್ದು, ಅವರ ಶೋಧ ಮುಂದುವರೆದಿದೆ. ಪಿಸ್ತೂಲ್ ಜೊತೆ ಎರಡು ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಲ್ಲಿರುವ ಜ್ಯುವೆಲರಿ ಮಳಿಗೆ ಮೇಲೆ ದಾಳಿ ನಡೆಸಲು ಅವರು ಪ್ರಯತ್ನಿಸಿದ್ದು, ಅದು ವಿಫಲವಾಗಿತ್ತು. ಅಲ್ಲಿಂದ ಮರಳುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top