Slide
Slide
Slide
previous arrow
next arrow

ಮೇಯಲು ಬಿಟ್ಟ ಆಕಳನ್ನು ಕತ್ತರಿಸಿದ ಗೋ ಭಕ್ಷಕರು

ಭಟ್ಕಳ: ತಾಲೂಕಿನ ಕೋಟಖಂಡ ಸಮೀಪ ಮೇಯಲು ಬಿಟ್ಟ ಆಕಳನ್ನು ಬೆಟ್ಟದ ಮೇಲೆಯೇ ಕೊಂದು ಮಾಂಸತೆಗೆದಿರುವ ಘಟನೆ ನಡೆದಿದೆ.

ಮೇಯಲು ಬಿಟ್ಟ ಆಕಳು ಮನೆಗೆ ಬಾರದಿದ್ದಾಗ ಆಕಳಿನ ಮಾಲೀಕ ಬಡಿಯಾ ಸಣ್ಣು ಗೊಂಡ ಹುಡುಕಲು ತೆರಳಿದ್ದಾರೆ. ಈ ವೇಳೆ ಕೋಟಖಂಡ ದ ಬೆಟ್ಟದಲ್ಲಿ ಆಕಳನ್ನು ಕತ್ತರಿಸಿ ಮಾಂಸ ತೆಗೆಯುತ್ತಿದ್ದ ಕಿಡಿಗೇಡಿಗಳು ಮಾಲೀಕನನ್ನು ಕಂಡು ಓಡಿಹೋಗಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಭಟ್ಕಳದ ಕಡೆ ಕಿಡಿಗೇಡಿಗಳು ಓಡಿ ಹೋಗಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪಂಚನಾಮೆ ಮಾಡಿ ತನಿಖೆ ಕೈಗೊಂಡಿದ್ದಾರೆ.

ಎಲ್ಲಾ ಚೆಕ್ ಪೋಸ್ಟ್ ಗಳನ್ನು ಬಿಗಿಗೊಳಿಸಿರುವುದರಿಂದ ಮೇಯಲು ಬಿಟ್ಟ ಆಕಳನ್ನು ಮಾಂಸದ ಆಸೆಗೆ ಕತ್ತರಿಸಿ ಮಾಂಸ ಮಾರಾಟ ಮಾಡುವ ಹುನ್ನಾರ ಶುರುವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಸಾಂದರ್ಭಿಕ ಚಿತ್ರ

Share This
Back to top