Slide
Slide
Slide
previous arrow
next arrow

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ತಾಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯಲ್ಲಿ ನಡೆದ ಶಿರಸಿ ತಾಲೂಕಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

10ನೇ ತರಗತಿಯ ನಿಖಿತಾ ಭಟ್ ಚರ್ಚಾಸ್ಪರ್ಧೆಯಲ್ಲಿ , 9ನೇ ತರಗತಿಯ ಪ್ರೇರಣಾ ಮಂಗಳೂರು ಆಶುಭಾಷಣದಲ್ಲಿ, 8ನೇ ತರಗತಿಯ ಪ್ರಾರ್ಥನಾ ಜಿ. ಭಟ್ ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ತರಗತಿಯ ಸಮೀಕ್ಷಾ ಹೆಗಡೆ ಸಂಸ್ಕೃತ ಭಾಷಣದಲ್ಲಿ, 10ನೇತರಗತಿಯ ಶ್ರೇಯಸ್ ಹೆಗಡೆ ಹಾಗೂ 9ನೇ ತರಗತಿಯ ಪ್ರಮಥ್ ಹೆಗಡೆ ಕ್ವಿಜ್‌ನಲ್ಲಿ,10ನೇ ತರಗತಿಯ ಪಿ.ಜಿ.ಶ್ರೇಷ್ಠಾ ಇಂಗ್ಲೀಷ್ ಭಾಷಣದಲ್ಲಿ, 9ನೇ ತರಗತಿಯ ವಸುಂಧರಾ ಹೆಗಡೆ ಗಝಲ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, 10ನೇ ತರಗತಿಯ ಪ್ರತೀಕ್ಷಾ ಭಟ್ ಕನ್ನಡ ಭಾಷಣ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಿಗೆ ಆಡಳಿತ ಮಂಡಳಿ, ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top